

25th December 2025

ಜಮಖಂಡಿ : ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದೇ ಕಲಿಕಾ ಹಬ್ಬದ ಕಾರ್ಯಕ್ರಮ ಎಂದು ಎಸ್ಡಿಎಂಸಿ ಅಧ್ಯಕ್ಷ ರಾಜೇಸಾಬ ಮಸಳಿ ಹೇಳಿದರು.
ಚೌಡಯ್ಯ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ-5ರಲ್ಲಿ ಬುಧವಾರ ಜಮಖಂಡಿ ಕ್ಲಸ್ಟರ್ ಮಟ್ಟದ 2025-26 ನೇಸಾಲಿನ ಕಲಿಕಾ ಹಬ್ಬವನ್ನು ಕಾರ್ಯಕ್ರಮವನ್ನು ಉದ್ಘಾಟಣೆ ಮಾಡಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರಿಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಸೋಲು ಗೆಲುವು ಕಾಣಬೇಕು ಅದು ನಮ್ಮ ಜೀವನ ಅನುಕೂಲವಾಗುತ್ತದೆ ಎಂದರು
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಬಾಗೆನ್ನವರ, ಉರ್ದು ಇ.ಸಿ.ಓ ಸಮೀನಾ ಕೌಸರ್, ನಿಜಾಮ ಖುದಾವನ, ಶಬ್ಬಿರ ಜತ್ತಿ, ಮೌಲಾನಾ ಮೋಹಸಿನ ಹೊಸಕೋಟಿ, ಹಾಜಿಲಾಲ ಸಿಂದಗಿ, ಆರಿಫ್ ಅತ್ತಾರ್, ಮುಬಾರಕ್ ಅಪರಾದ, ಶಬ್ಬಿರ ಅತ್ತಾರ, ಎಸ್.ಆರ್ ಇನಾಮದಾರ, ಎಂ.ಎಂ ಪೆಂಡಾರಿ, ಎಂ.ಎ ಅತ್ತಾರ, ಎ.ಎಂ ಗೋರಿಖಾನ, ಆರ್.ಎಲ್ ಇನಾಮಾದಾರ, ಸಲೀಂ ನದಾಫ್, ಜೆ.ಎಚ್ ಡಾಲಯತ, ಕರೀಂ ಪೆಂಡಾರಿ, ಎಂ.ಎಂ.ಜಂಗಲಿ, ಮೋಶಿನ್ ಇಲ್ಕಲ್ ಇದ್ದರು

ಶ್ರೀ ಕ್ಷೇತ್ರ ಹುಲಿಗೇಮ್ಮ ದೇವಸ್ಥಾನ ಹುಂಡಿ ಎಣಿಕೆ 20 ದಿನದಲ್ಲಿ ರೂ.1.3 ಕೋಟಿ ಹಣ ಸಂಗ್ರಹ- 70 ಗ್ರಾಂ ಕಚ್ಚಾ ಬಂಗಾರ 3 ಕೆಜಿ ಬೆಳ್ಳಿ ದೇಣಿಗೆ